ಔರ ಸಿನಿಮಾಸ್ ಲಾಂಛನದಲ್ಲಿ ಆನಂದರಾಜ್ ಅವರು ನಿರ್ಮಿಸುತ್ತಿರುವ ‘ಅಂಬರ’ ಚಿತ್ರಕ್ಕಾಗಿ ಮೋಹನ್ ಅವರು ಬರೆದಿರುವ ‘ಕಾಣದೇ ಕಾಣದೇ ಮನಸಿನ ನೋವು ಕೇಳದೇ ಕೇಳದೇ ಹೃದಯದ ನೋವು‘ ಎಂಬ ಹಾಡಿನ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆದಿದೆ. ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನ ಮಾಡಿದ ಈ ಗೀತೆಯ ಚಿತ್ರೀಕರಣದಲ್ಲಿ ಯೋಗೀಶ್, ಭಾಮ, ರಾಮಕೃಷ್ಣ, ಅರುಣ್ಬಾಲರಾಜ್ ಭಾಗವಹಿಸಿದ್ದರು.
ಸೇನ್ಪ್ರಕಾಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಅಂಬರ’ಕ್ಕೆ ನಾಗರಾಜ್ ಕೋಟೆ ಸಂಭಾಷಣೆ ಬರೆದಿದ್ದಾರೆ. ಅಭಿಮಾನ್ರಾಯ್ ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ, ರವಿಕುಮಾರ್ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಯೋಗರಾಜ್ ಭರಣಿ ಸಹ ನಿರ್ದೇಶನ, ಅನಿಲ್ ಕುಮಾರ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ರಾಜು ಸಹ ನಿರ್ಮಾಪಕರಾಗಿದ್ದಾರೆ. ಯೋಗೀಶ್, ಭಾಮ, ಸಾಧುಕೋಕಿಲಾ, ವಿಶ್ವ, ಬ್ಯಾಂಕ್ ಜನಾರ್ದನ್, ರಾಮಕೃಷ್ಣ, ಜೈಜಗದೀಶ್, ಪದ್ಮಾವಾಸಂತಿ, ಹರೀಶ್ರಾಜ್, ವಿನಾಯಕ ಜೋಶಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.